Sunday, May 15, 2011

visit to Honnavalli,Tiptur taluk.


ಹೊನ್ನವಳ್ಳಿ ಇದು ತಿಪಟೂರು ತಾಲೂಕಿನ ಒಂದು ದೊಡ್ಡ ಹಳ್ಳಿ ಈಗ.ಆದರೆ ಇತಿಹಾಸದಲ್ಲಿ ಬಹಳ ಹೆಸರಾದ ಸ್ಥಳ. ೮೦೦ ವರ್ಷಗಳಿಗು ಹಿಂದೆ ಒಬ್ಬ ಪಾಳ್ಳೆಗಾರನಿಂದ ಸ್ತಾಪಿಸಲ್ಪಟ್ಟ ಹಳ್ಳಿ.ಹಾರನಹಳ್ಳಿ ರಾಜ್ಯದ ಗಡಿ ಸೀಮೆಯಾದ್ದರಿಂದ ಇಲ್ಲಿ ಒಂದು ಕೋಟೆ ಕೂಡ ಇದೆ.ಹೊಯ್ಸಳರು,ನಂತರ ವಿಜಯನಗರದ ಅರಸರು ನಂತರ ಇಕ್ಕೇರಿಯ ನಾಯಕರು ಆಳಿ ಮೈಸೂರು ಅರಸರ ಕೈ ಸೇರಿತು. ಹೈದರನ  ನಂತರ  ಮತ್ತೆ ಮೈಸೂರರಸರ ಕೈಗೆ ಬಂತು. ಹೊನ್ನವಳ್ಳಿ ಹೆಸರಾದದ್ದೆ ಆ ಊರಿಗೆ ಹೊನ್ನಿನ ಮಳೆ ಸುರಿದಿದ್ದರಿಂದ ಅಂತೆ. ಊರಿನಲ್ಲಿ ೨೪ ದೇವಾಲಯಗಳಿವೆ ,೨೪ ರಲ್ಲು ಈಗಲು ಪ್ರತಿದಿನ ಪೂಜೆ ನಡೆಯುತ್ತದೆ.ದೊಡ್ಡದೆಂದರೆ ಲಕ್ಶ್ಮಿನರಸಿಂಹಸ್ವಾಮಿ, ಹೊಯ್ಸಳರ ಕಾಲದ್ದೆಂದು ಪ್ರತೀತಿ. ಮಾದರಿ ಯೇನೊ ಅವರದ್ದೆ. ಆದರೆ ಸಾಧಾರಣ.ಒಳ ಅಥವ ಹೊರ ಗೋಡೆಗಳ ಮೇಲೆ ಅಲಂಕಾರಗಳೇ ಇಲ್ಲ. ಪೂಜೆಗೊಳ್ಳುವ ವಿಗ್ರಹಗಳು ಮಾತ್ರ ಸುಂದರ.



ನಮ್ಮ ಗುರು ಪುತ್ರ ಕೃಷ್ಣಮೂರ್ತಿಯ ಕೃಪೆ ಇಂದಿನ ನಮ್ಮ ಭೇಟಿ ಅಲ್ಲಿಗೆ. ಹೋಮ ಹವನ ಪ್ರವಚನಗಳು ಎಲ್ಲ ಇತ್ತು.ಕೈಲಾಸೇಶ್ವರ ದೇವಾಲಯ ಊರ ಹೊರಗೆ ತೋಟದಲ್ಲಿ. ಪುರಾತನ ವಾದರು ಅತಿ ಸಾಧಾರಣ.ತಲೆ ಬಗ್ಗಿಸಿ ಒಳಗೆ ಹೋಗಬೇಕು. ಆರಡಿ ಎತ್ತರದ ಛಾವಣಿ. 






No comments: