Saturday, March 20, 2010

gadagina suttamutta.

ಎರಡು ವರ್ಷಗಳ ಯೋಜನೆ ಕಳೆದ ಶನಿವಾರ ಪೂರ್ಣವಾಯಿತು.ಅಂತು ಹುಬ್ಬಳ್ಳಿ ಯ ಭ್ಹೇಟಿಯಿನ್ದ ಗದಗಿಗು ಹೋಗುವ ಸೌಭಾಗ್ಯ ಸಿಕ್ಕಿತು. ಹುಭ್ಭಳ್ಳಿಯ ಕೆ ಎಮ್ ಸಿ ಯ ಚರ್ಮರೋಗ ವಿಭಾಗದಲ್ಲಿ ಈ ಹಿಂದೆ ಅಲ್ಲಿ ಕೆಲಸ ಮಾಡಿದ ಮಾಸ್ತರುಗಳೀಗೆ ಶಾಲು ಹೊದೆಸುವ ಕಾರ್ಯಕ್ರಮ್ ರೂಪಿಸಿದ್ದರು ಅಲ್ಲಿಅ ವೈದ್ಯರಾದ ಡಾ ತೋಫಖಾನೆಯವರು. ಅವರ ಸಹೋದ್ಯೋಗಿ ಡಾ ರವಿ ಯ ಆಹ್ವಾನ ದಂತೆ ನಾನು ಷ್ರೀಮತಿಯವರ ಜೊತೆ ಬಿಜಾಪುರ್ ಎಕ್ಸ್ ಪ್ರೆಸ್ ನಲ್ಲಿ ಶನಿವಾರ ಬೆಳಗ್ಗೆ  ೫ ಗಂಟೆಗೆ  ಹುಬ್ಬಳ್ಳಿ ತಲುಪಿದೆವು. ಅಲ್ಲಿ ಸ್ವಲ್ಪ ವಿಶ್ರಾಂತಿಯ ನಂತರ  ಸ್ವಾತಿ ಯಲ್ಲಿ ಉಪಾಹಾರ ರವಿ ಜೊತೆ. ಆಮೇಲೆ ರವಿ ಕಾರಿನಲ್ಲಿ ಡ್ರೈವರ್  ಶಿವಾನಂದ್ ನಮ್ಮನ್ನ ಗದಗಿನತ್ತ ಕರೆದೊಯ್ದ. ದಾರಿಯಲ್ಲಿ ಪರಿಚಿತ ಹೆಸರುಗಳ ಊರುಗಳು. ಅಣ್ಣಿಗೆರಿ, ಹುಲಕೋಟಿ,ಕೋಳೀವಾಡ ಹಳ್ಳಿಕೇರಿ. ಶಿವನಂದ  ನಮ್ಮನ್ನು ಮೊದಲು ಕರೆದೊಯ್ದಿದ್ದದ್ದು ಅಣ್ಣಿಗೆರಿಗೆ. ಅಲ್ಲಿ ಚಾಲುಕ್ಯರ ಕಾಲದ ಅಮೃತೇಶ್ವರ ದೇವಾಲಯ. ನಮ್ಮ ಪಟ್ಟಿಯಲ್ಲಿರಲಿಲ್ಲ ಮೊದಲು. ನಂತರ ಅನಿಸಿದ್ದು ನಾವು ಹೋಗದಿದ್ದರೆ ನಷ್ಟ ನಮ್ಗೆ ಎಂಬುದು. ಒಳಂಗಣ ಸ್ವಚ್ಛ ಆದರೆ ಊರು ಕಷ್ಟ ಕಷ್ಟ. ೨೦ ಸಾವಿರ ಜನಸಂಖ್ಯೆ ಸ್ಥಿತಿ ಅಲ್ಲಿನ ಆಡಳಿತಕ್ಕೆ ಮೂಕ ಸಾಕ್ಷಿ. ಚಾಲುಕ್ಯರ  ಕಾಲದಲ್ಲೆ ಇದೆಯೇನೋ ಅನಿಸಿತು. 


ಅಲ್ಲಿಂದ ಗದಗು.ಡಾ ಇನಾಮ್ದಾರ್ ಅಣ್ಣ ನಮಗಾಗಿ ವಿಶ್ವ ಹೋಟೆಲ್ ಬಳಿ ಇದ್ದರು. ಅವರೊಂದಿಗೆ ಗದಗಿನ ತ್ರಿಕೂಟೇಶ್ವರ, ಮತ್ತೆ ವೀರನಾರಾಯಣ ನಿಗೆ ಭೇಟಿ.  ನಂತರ್ ಗದಗಿನಿಂದ ದಂಬಳ ೨೪ ಕಿ ಮೀ ಅಲ್ಲಿ ವಿನೂತನ ಶೈಲಿಯ ೨೪ ಮುಖಗಳ ದೊಡ್ಡ ಬಸಪ್ಪ ದೇವಾಲಯ ಕಲ್ಯಾಣದ ಚಾಲುಕ್ಯರ ಕೊಡುಗೆ. ಪರಿಸರ ಚನ್ನಾಗಿದೆ. ಹುಲ್ಲು ಹಾಸು ಸುತ್ತಲು ಕೊಳಕು ಇಲ್ಲ. ಆದರೆ ಗದಗಿಗೆ ಅಷ್ಟು ಹತ್ತಿರ ಇದ್ದರು ಪ್ರಚಾರ ಸಾಲದು. ಅಲ್ಲಿಂದ ಸ್ವಲ್ಪ ಕಚ್ಚ  ರಸ್ತೆಯಲ್ಲಿ ಕೊಪ್ಪಳ ಜಿಲ್ಲೆಯ ಇಟಗಿಗೆ. ದೇವಾಲಯಗಳ ಚಕ್ರವರ್ತಿ ಎಂದೆ ಚಾಲುಕ್ಯರ ಕಾಲದಲ್ಲಿ ಕರೆಯಲ್ಪಡುತ್ತಿದ್ದ ಮಹದೇವ ದೇವಾಲಯ ದರ್ಶನ.೧೨ ಗಂಟೆ  ಉರಿ ಬಿಸಿಲು ಆದರೆ ನಮಗಾಗಿ ಅಂದು ಮೋಡ ಕವಿದ ವಾತಾವರಣ. ಪುನರ್ನಿಮಾಣ ನಡೆಯುತ್ತಿತ್ತು.ಮುಖಮಂಡಪ ದ ತಂಪಿನಲ್ಲಿ ಊರಿನ ಯಾವುದೋ ವ್ಯಾಜ್ಯ ತೀರ್ಮಾನ ವಾಗುತ್ತಿತ್ತು. ಪಕ್ಕದಾಲೇ ದೊಡ್ಡದಾದ ಹೊಸದಾಗಿ ಪುನರ್ನಿಮಾಣ ಮಾಡಿದ ಕಲ್ಯಾಣಿ. ಇನ್ನೊಂದೆರಡು ವರ್ಷಗಳಲ್ಲಿ ಅದ್ಭುತ ಪ್ರವಾಸಿ ತಾಣ ಸ್ಪಷ್ಟ. 
ಅಲ್ಲಿಂದ ಕೇವಲ ೭ ಕಿ ಮೀ ದೂರದ ಕುಕ್ಕನೂರಿಗೆ. ಅಲ್ಲಿ ೯-೧೦ ನೆ ಶತಮಾನದ, ಅಮೋಘವರ್ಷನ ಕಾಲದಲ್ಲಿ ನಿರ್ಮಾಣವಾದ ನವಲಿಂಗ ದೇವಾಲಯ ನಮ್ಮವರ ಇತಿಹಾಸ ಪ್ರಜ್ನೆ ಗೆ ಸಾಕ್ಷಿ ಯಾಗಿ ನಿಂತಿದೆ. ಹಾಗೆ ಬಿಟ್ಟರೆ ಕೆಲವೆ ವ‍ರ್ಷಗಳಲ್ಲಿ ನಾಶ ಖಂಡಿತ.
ಅಲ್ಲಿಂದ ಗದಗಿಗೆ ಹಿಂದಕ್ಕೆ. ದಾರಿಯಲ್ಲಿ ಪ್ರಸಿದ್ದ ಲಕ್ಕುಂಡಿ ದರ್ಶನ. ದೇಗುಲಗಳ ತವರು ಲಕ್ಕುಂಡಿ. ೧೦೧ ಇದ್ದವು ಈಗ ಬೆರಳೆಣಿಕೆಯಷ್ಟು. ಕಾಶಿ ವಿಶ್ವೇಶ್ವರ, ಸೋಮೇಶ್ವರ, ಬ್ರಹ್ಮ ಜಿನಾಲಯ,ಮುಸುಕಿನ ಬಾವಿ. ಲಕ್ಕುಂಡಿ ದಾನ ಚಿಂತಾಮಣೀ ಅತ್ತಿಮಬ್ಬೆಯ ತವರು.
ನಂತರ ಗದಗು. ಅಲ್ಲಿ ಇನಾಮದಾರ ಅವರ ಮನೆಯಲ್ಲಿ ವಿಶ್ರಾಂತಿ, ಊಟ .ಔತಣ  ಮತ್ತೆ ಶ್ರೀಮತಿಗೆ ಮಗಳೆಂದು ಬಹುಮಾನ. ಸಾರ್ಥಕ ಪ್ರಯಾಣ.
ಮತ್ತೆ ಹುಬ್ಬಳ್ಳಿಗೆ ಪಯಣ. ದಾರಿಯಲ್ಲಿ ಕೋಳಿವಾಡ ಕ್ಕೆ ಭೇಟಿ ಕೃಪೆ ನಮ್ಮ ಡ್ರೈವರ್ ಶಿವಾನಂದ. ಅಲ್ಲಿಯೆ ಓದಿದ್ದಂತೆ. ಸೋದರಳೀಯನಿಗೆ ಫೋನ್ ಮಾಡಿ ನಮ್ಮ ಭೇಟಿ ನಿರ್ಣಯ ಮಾಡಿದ. ಕವಿ ಕುಮಾರವ್ಯಾಸನ ೪೦ನೆ ತಲೆ ತ್ರ್ಯಂಬಕೇಶ್ವರ್ ಪಾಟಿಲರ ಭೇಟಿ. ಕವಿಯ ಮೂಲ ಪ್ರತಿ ತಾಳೆ ಗರಿಗಳ ದರ್ಶನ. ಸೌಭಾಗ್ಯ ನಮ್ಮದು.
ವಾಪಸ್ ಹುಬ್ಬಳ್ಳಿಗೆ ರಾತ್ರಿ ೮ ಗಂಟೆಗೆ.ರಾತ್ರಿ ರವಿ ಮತ್ತೆ ಬೇಲೂರ್ ಜೊತೆ ಊಟ ಸ್ವಾತಿಯಲ್ಲಿ.

ಮಾರನೆ ದಿನ ಸನ್ಮಾನ ಕಾರ್ಯಕ್ರಮ ಮತ್ತು ಮೊಡವೆಗಳ ಮೇಲೆ ಸೈಂಟಿಫಿಕ್ ಕಾರ್ಯಕ್ರಮ ಹೋಟಲ್ ಕ್ಲಾರ್ಕ್ಸ್ ಇನ್ ನಲ್ಲಿ. ಚಿಕ್ಕ, ಚೊಕ್ಕ ಹೋಟಲ್.

ನನ್ನ ಹಳೆಯ ಕಾಲೇಜ್ ಕೆ ಎಮ್ ಸಿ ಗೆ ಭೇಟಿ ಕೊಟ್ಟು ರಾತ್ರಿ ಚೆನ್ನಮ್ಮ ಎಕ್ಸ್ ಪ್ರೆಸ್ ನಲ್ಲಿ ವಾಪಸ್.


No comments: