Tuesday, November 11, 2008











ಒಂದು ಪ್ರವಾಸದ ಸುತ್ತ.

ಬಹಳ ದಿನಗಳಿಂದ ಕಾಡುತ್ತಿದ್ದ ಪ್ರವಾಸದ ಬಯಕೆ ಅಂದು ಭಾನುವಾರ ಈಡೇರಿತು. ಬೆಳಗಿನ ೬ ಗಂಟೆಗೆ ಬೆಂಗಳೂರಿನಿಂದ ಹೊರಟು ಮೊದಲು ಆದಿ ಚುಂಚನಗಿರಿ ಹೊಸ ಕಾಲಭೈರವನನ್ನು ನೋಡಿ ನಂತರ ನಾಗಮಂಗಲದಲ್ಲಿ ಹೊಯ್ಸಳರ ಕಾಲದ ಸೌಮ್ಯಕೇಶವನ ಆವಾಸ ಸ್ಥಾನ, ಅದಕ್ಕೂ ಹಳೆಯ (ಅಲ್ಳಿಯಅರ್ಚಕರ ಹೇಳಿಕೆಯಂತೆ) ಲಕ್ಷ್ಮಿನಾರಾಯಣನ ದೇವಾಲಯ ನೋಡಿದ್ದಾಯಿತು. ಅಲ್ಲಿಂದ ಮುಂದೆ ಮೇಲ್ಕೋಟೆ ಗೆ ನಮ್ಮ ಪ್ರಯಾಣ. ಬೆಟ್ಟದ ಮೇಲೆ ಹತ್ತಿ ಹಕ್ಕಿಯ ನೋಟ ನೋಡಿ ಇಳಿದ ಮೇಲೆ ಚೆಲುವ ನಾರಾಯಣನ ದರ್ಶನ. ಅಲ್ಳಿಯ ಶ್ರೀ ನರಸರಾಜ ಭಟ್ಟರ ಸಹಾಯ ಊಟಕ್ಕೆ ದಾರಿ. ಇದ್ದಕ್ಕಿದ್ದಂತೆ ಹೊಸ ಹೊಳಲು ನೋಡ ಬೇಕೆನಿಸಿತು. ಕೆ ಆರ್ ಪೇಟೆಯ ಹತ್ತಿರ ೩ ಕಿ ಮೀ ದೂರದಲ್ಲಿರುವ ಆ ಊರು ಕೇವಲ ೨೪ ಕಿ ಮೀ ದೂರ ಹತ್ತಿರದಲ್ಲೆ ಇದ್ದಂತಿತ್ತು. ಬೇಲೂರು ಹಳೇಬೀಡು ನೋಡದವರು, ನೋಡಿದವರು ಕೂಡ ನೋಡಲೇಬೇಕಾದ ದೇವಾಲಯ ಅದು. ಅಲ್ಲಿಂದ ನಮ್ಮ ಪಯಣ ಮತ್ತೆ ಮೆಲ್ಕೋಟೆಗೆ. ಕಲ್ಯಾಣಿಗೆ ಭೇಟಿ. ನಾವು ಮೊದಲೇ ನಿರ್ಧರಿಸಿದ್ದಂತೆ ಬಸರಾಳು ಮಲ್ಲಿಕಾರ್ಜುನ ದೇವಾಲಯ ನಮ್ಮ ಆದ್ಯತೆಯಾಗಿತ್ತು. ಅಂತರ್ಜಾಲದಲ್ಲಿ ನೋಡಿದ ಚಿತ್ರ ದಲ್ಲಿ ಕಂಡ ದೃಶ್ಯ ಸಾಕಾರವಾಗಿತ್ತು. ಪಲ್ಲವಿಯ ಸಹಾಯ ನೆನೆಯಲೇ ಬೇಕು.